ಸುದರ್ಶನ್ ಕ್ರಿಯೇಷನ್ಸ್ ಲಾಂಛನದಲ್ಲಿ ಟಿ.ಎನ್. ಗೋಪಾಲಕೃಷ್ಣ ನಿರ್ಮಿಸುತ್ತಿರುವ ಗುಂಡ್ರಗೋವಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಬರುವ ತಿಂಗಳ ೩ನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಕು ಸಕಲ ಸಿದ್ಧತೆಗಳು ನಡೆಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಇಂದಾವರ, ಮತ್ತಾವರ ಗ್ರಾಮಗಳಲ್ಲಿ ಮಾತಿನ ಭಾಗ ಹಾಗೂ ರಾಜ್ಯದ ರಮಣೀಯ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದ್ದು, ಆ ದಿನಗಳು ಚಿತ್ರದಲ್ಲಿ ಸರ್ದಾರ ಪಾತ್ರದಿಂದ ಜನಮನ ಸೂರೆಗೊಂಡಿದ್ದ ಸತ್ಯ ಈ ಚಿತ್ರದ ನಾಯಕ ಪಾತ್ರ ನಿರ್ವಹಿಸಿದ್ದಾರೆ. ಹಳ್ಳಿಯಲ್ಲಿ ಪೋಲಿಯಾಗಿ ಅಲೆಯುತ್ತ ಗುಂಡ್ರಗೋವಿ ಎನಿಸಿಕೊಂಡಿದ್ದ ನಾಯಕನ ವಿಶೇಷತೆಗಳೇನು ಎಂಬುದನ್ನು ನಿರ್ದೇಶಕ ಎಂ.ಜಿ. ತಾರೇಶ್ ಬಾಬು ತುಂಬಾ ಅದ್ಭುತವಾಗಿ ನಿರೂಪಿಸಿದ್ದಾರೆ. ಕಳೆದ ವಾರ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರವನ್ನು ಮೆಚ್ಚುಕೊಂಡು ಯಾವುದೇ ಕಟ್ ಇಲ್ಲದೆ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ. ನಿರಂಜನ ಬಾಬುರವರ ಛಾಯಾಗ್ರಹಣ, ಫೀನಿಕ್ಸ್ ರಾಜನ್ ಅವರ ಸಂಗೀತ ಸಂಯೋಜನೆ ಇರುವ ಚಿತ್ರದ ತಾರಾಬಳಗದಲ್ಲಿ ಸತ್ಯ, ನವ್ಯಶ್ರೀ, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್, ಆಶಾಲತಾ, ಶರಣ್, ಮೊದಲಾದವರಿದ್ದಾರೆ.